ಕ್ಷೇತ್ರ ಪ್ರಯೋಗಗಳು
ಕ್ಷೇತ್ರ ಬೆಳೆಗಳಲ್ಲಿ ಹೊಸ ತಳಿಗಳ ಬಿಡುಗಡೆಯ ವಿಧಾನ
ಹೊಸ ಕ್ಷೇತ್ರ ಪ್ರಯೋಗಗಳು
2021-22ರಲ್ಲಿ, ಭತ್ತ, ನೆಲಗಡಲೆ, ಹರಳು, ಎಳ್ಳು, ಹುಚ್ಚೆಳ್ಳು, ಬಂಬಾರ ನೆಲಗಡಲೆ, ಮೇವಿನ ಜೋಳದ, ಕೊರಲೆ ಬೆಳೆಗಳಲ್ಲಿ ಒಟ್ಟು 9 ಹೊಸ ತಳಿಗಳ ಕ್ಷೇತ್ರ ಪ್ರಯೋಗಗಳು ಮತ್ತು ಬೆಳೆ ಉತ್ಪಾದನೆ ಪದ್ಧತಿಯಲ್ಲಿ ಒಟ್ಟು 11 ಕ್ಷೇತ್ರ ಪ್ರಯೋಗಗಳನ್ನು ರೈತರ ತಾಕುಗಳಲ್ಲಿ ಕೈಗೊಳ್ಳಲು ಶಿಫಾರಸ್ಸು ಮಾಡಲಾಗಿದೆ.
ಕ್ರ. ಸಂ | ಬೆಳೆ | ತಳಿ | ಶಿಫಾರಸ್ಸು ಮಾಡಲಾದ ವಲಯ |
1 | ಭತ್ತ | ಕೆ.ಎಂ.ಪಿ-225 | 6 |
2 | ಭತ್ತ | ಆರ್.ಎನ್.ಆರ್-15048 | 6 |
3 | ನೆಲಗಡಲೆ | ಜಿ.ಕೆ.ವಿ.ಕೆ-39 | 5 |
4 | ಕೊರಲೆ | ಜಿ.ಪಿ.ಯು.ಬಿ.ಟಿ.-2 | 5 and 6 |
5 | ಹರಳು | ಐ.ಸಿ.ಹೆಚ್-66 | 5 and 6 |
6 | ಹುಚ್ಚೆಳ್ಳು | ಕೆ.ಬಿ.ಎನ್-2 | 5 and 6 |
7 | ಎಳ್ಳು | ಜಿ.ಕೆ.ವಿ.ಕೆ.ಎಸ್-1 | 5 |
8 | ಬಂಬಾರ ನೆಲಗಡಲೆ | ಸಿ.ಜಿ.ಕೆ-ಎಸ್.ಬಿ-42 | 5 |
9 | ಮೇವಿನ ಜೋಳ | ಸಿ.ಎನ್.ಎಫ್.ಎಸ್.1 | 6 |
ಬೆಳೆ ಉತ್ಪಾದನೆ ಪದ್ಧತಿಗಳು
ಬೇಸಾಯಶಾಸ್ತ್ರ
- ನೇರ ಬಿತ್ತನೆ ಭತ್ತದಲ್ಲಿ ಕಳೆ ನಿರ್ವಹಣೆ
- ಹಾರಕ ಬೆಳೆಯಲ್ಲಿ ಉದಯೋತ್ತರ ಕಳೆನಾಶಕಗಳ ಮೌಲ್ಯಮಾಪನೆ
- ಹವಮಾನ ಬದಲಾಣೆಯ ಸನ್ನಿವೇಶದಲ್ಲಿ ವಿವಿಧ ಪಾಕ್ಷಿಕ ಬಿತ್ತನೆಗಳಿಂದ ಸಿರಿಧಾನ್ಯ ಬೆಳೆಗಳಲ್ಲಾಗುವ ಪರಿಣಾಮಗಳು
- ಕೊರಲೆ ಬೆಳೆ ಕಾರ್ಯಕ್ಷಮತೆಯ ಮೇಲೆ ರಸಗೊಬ್ಬರ ಮತ್ತು ಬೆಳೆ ಅಂತರಮಟ್ಟಗಳ ಪರಿಣಾಮ
- ಏರೋಬಿಕ್ ಭತ್ತದಲ್ಲಿ ರಸಾವರಿ
- ಸೂರ್ಯಕಾಂತಿ ಬೆಳೆಯಲ್ಲಿ ಉದಯೋತ್ತರ ಕಳೆನಾಶಕ ಬಳಕೆ
- ಭತ್ತದ ಒಣ ಸಸಿಮಡಿಯಲ್ಲಿ ಉದಯೋತ್ತರ ಮತ್ತು ಉದಯಪೂರ್ವ ಕಳೆನಾಶಕಗಳಿಂದ ಕಳೆ ನಿರ್ವಹಣೆ
- ಭತ್ತದ ಕೆಸರು ಸಸಿಮಡಿಯಲ್ಲಿ ಉದಯೋತ್ತರ ಕಳೆನಾಶಕಗಳ ಕಳೆ ನಿರ್ವಹಣೆ
- ರಾಗಿ-ಅಲಸಂದೆ ಬೆಳೆ ಪದ್ಧತಿಯಲ್ಲಿ ರಂಜಕದಿಂದ ಪುಷ್ಟೀಕರಿಸಿದ ಗೊಬ್ಬರವನ್ನು ಬಳಸುವುದರಿಂದ ಬೆಳೆಯ ಇಳುವರಿ ಮತ್ತು ಮಣ್ಣಿನ ಗುಣದರ್ಮಗಳ ಮೇಲೆ ಆಗುವ ಪರಿಣಾಮ
ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ
- ಕ್ಷಾರೀಯ ಮಣ್ಣಿನಲ್ಲಿ ಭತ್ತದ ಬೆಳವಣಿಗೆ ಹಾಗೂ ಇಳುವರಿಯ ಮೇಲೆ ಲಘುಪೋಷಕಾಂಶಗಳ ಮಿಶ್ರಣದ ಸಿಂಪರಣೆಯ ಪರಿಣಾಮ
ಜೇನು ಕೃಷಿ
- ಚೌಕಟ್ಟಿನ ಜೇನುಗೂಡುಗಳಲ್ಲಿ ತುಡುವೆ ಜೇನು ಸಾಕಾಣಿಕೆಯ ಮೌಲ್ಯಮಾಪನ